Tuesday, September 30, 2008

ಮೈಸೂರು ದಸರಾ

ಕನ್ನಡನಾಡಲಿ ನಡೆಯುವ ಮೈಸೂರಿನ ದಸರಾ
ನೋಡಲು ಎರಡು ಕಣ್ಣು ಸಾಲದು, ನವರಾತ್ರಿ ಸಡಗರ
.
ಆ ದಿನಗಳಲಿ, ಪ್ರತಿದಿನಕ್ಕೂ ತನ್ನದೇ ಆದ ವಿಶಿಷ್ಟತೆ
ನವರಾತ್ರಿಯಲಿ ಮೈಸೂರು ಆಗುವುದು ಹರ್ಷದ ಸಂತೆ
ವಿಜಯದಶಮಿಯಂದು ಎಲ್ಲರಲ್ಲಿದೆ ಸಮನ್ವಯ ಸಮಾನತೆ
ಎಲ್ಲೆಡೆ ಕಾಣುವುದು ವಿಶ್ವಾಸವಿರಲಿ ಎನ್ನುವ ಆದರತೆ
.
ದಶಮಿಯಲಿ ದುರ್ಗಾಮಾತೆ ಏರುವಳು ಚಿನ್ನದ ಅಂಬಾರಿ
ನೋಡಲು ಚೆನ್ನ, ದುರ್ಗಿಯ ಆನೆ ಮೇಲಿನ ಸವಾರಿ
ಆ ಸಂಜೆಗಳಲ್ಲಿ ನಡೆವ ಸಾಂಸ್ಕೃತಿಕ ಕಾರ್ಯಕ್ರಮ ವೈಖರಿ
ಕಲಾದೇವಿಯ ಸಿರಿಯ ಕಂಡವಗೆ ಮೂಡುವುದು ಅಚ್ಚರಿ
.
ಮಹಾನವಮಿಯಂದು ಪೂಜೆ ನಡೆಯುವುದು ಆಯುಧಗಳಿಗೆ
ಮರೆಯಲಾಗುವುದು ಯಾರಿಗೂ, ಆ ಸಂತೋಷ ರಸಗಳಿಗೆ
ಮರುದಿನ ನೀಡಬೇಕು, ಶಮೀಪತ್ರವನು ಎಲ್ಲರಿಗೆ
ಪಾಲ್ಗೊಳ್ಳಲು ಪಾವತಿಸಬೇಕು 'ವಿಶ್ವಾಸ'ವೆಂಬ ತೆರಿಗೆ

No comments: