ಹಟ್ಟಿಗೆ ಹೋಗೋಣ ನಾವು
ತಿಪ್ಪೇಶನ ಜಾತ್ರೆಗೆ ಹೋಗೋಣ
ತಿಪ್ಪೇಶನ ಜಾತ್ರೆಗೆ ಹೋಗೋಣ
ಎತ್ತಿನ ಬಂಡಿಯ ಮೇಲೆ
ಎಲ್ಲರೂ ನಾವು ಏರಿ
ಸರಸರ ಹೆಜ್ಜೆಯನ್ನಿಕ್ಕುತ್ತಿದೆ
ಸಿಂಗರಿಸಿದ ನಮ್ ಹೋರಿ
ಎಲ್ಲರೂ ನಾವು ಏರಿ
ಸರಸರ ಹೆಜ್ಜೆಯನ್ನಿಕ್ಕುತ್ತಿದೆ
ಸಿಂಗರಿಸಿದ ನಮ್ ಹೋರಿ
ನೋಡಣ್ಣಾ ಅಲ್ಲಿದೆ
ಮುಗಿಲೆತ್ತರದಾ ತೇರು
ನಾಯಕನಹಟ್ಟಿ ಶ್ರೀ ಗುರು
ತಿಪ್ಪೇಶನ ಜಾತ್ರೆ ಬಲುಜೋರು
ಮುಗಿಲೆತ್ತರದಾ ತೇರು
ನಾಯಕನಹಟ್ಟಿ ಶ್ರೀ ಗುರು
ತಿಪ್ಪೇಶನ ಜಾತ್ರೆ ಬಲುಜೋರು
'ಮಾಡಿದಷ್ಟು ನೀಡು ಭಿಕ್ಷೆ'ಯ
ಕಾಯಕಯೋಗಿಯು ನೀನು
ಎಲ್ಲರನು ನೀ ಸಲಹಯ್ಯ
ಎಂದು ನಾ ನಿನ್ನ ಬೇಡುವೆನು
ಕಾಯಕಯೋಗಿಯು ನೀನು
ಎಲ್ಲರನು ನೀ ಸಲಹಯ್ಯ
ಎಂದು ನಾ ನಿನ್ನ ಬೇಡುವೆನು
13 comments:
HI,tumba channagide....
ಜಾತ್ರೆ ಅಂದ್ರೆ ಅದು ಒಂಥರಾ ದೊಡ್ಡ ಹಬ್ಬದ ಥರಾ , ನಮ್ಮೂರ ಜನರು ಸುತ್ತ ಮುತ್ತಲಿನ ಗ್ರಾಮದ ಜನರು ಸೇರಿ ಆಚರಿಸುವ ಹಬ್ಬವಿದ್ದಂತೆ. ಜಾತ್ರೇಲಿ ಸಿಗುವ ಮಜಾನೇ ಬೇರೇ ಬಣ್ಣ ಬಣ್ಣದ ಚಿಟ್ಟೆಗಳು ಹಾಗೂ ಪಡ್ಡೆ ಹುಡುಗ್ರು.. ಆ ತೇರು ಆ ದೇವ್ರು ಆ ಜನ್ರು ಕಣ್ಣಿಗಂತು ಹಬ್ಬಾನೆ... ಎಲ್ಲವು ಚಂದ.. ತುಂಬಾ ಚೆಂದವಾದ ಸಾಲುಗಳು.
ತುಂಬಾ ಚೆನ್ನಾಗಿದೆ
ಧನ್ಯವಾದಗಳು ಗೆಳೆಯ Manju Varaga & Srinivas Vk
ಕಾಯಕಯೋಗಿ ತಿಪ್ಪೇಶನ ಮೇಲಿನ ಭಕ್ತಿ ಪರವಶತೆ ಸುಂದರವಾಗಿ ಚಿತ್ರಿತ.
ಕವನದಲ್ಲಿ ಗ್ರಾಮೀಣ ಸೊಗಡಿದೆ.. ಓದಿ ಖುಷಿಯಾಯಿತು.. ಶುಭವಾಗಲಿ :)
ನನ್ನನು ಕರೆಯದೆ ಜಾತಿಗೆ ಹೋಗೋದು ತಪ್ಪಲ್ವ...... ಕವನ ಚನ್ನಾಗಿದೆ.... ಸ್ವಲ್ಪ ದೇವರ ಆರಾದನೇ ಇರಲಿ ದೇವತೆಯರ ಸಾಲಿನಲ್ಲಿ '
ಮದಕರಿ ನಾಯಕರ ಪಟ್ಟಾಭಿಷೆಕವಾಯ್ತು , ಈಗ ಹಟ್ಟಿಯಲ್ಲಿ ಉತ್ಸವ ಮಾಡಲು ಹೊರಟಿರುವಿರಿ ಶುಭವಾಗಲಿ..
ಧನ್ಯವಾದಗಳು ಗೆಳೆಯ Banavasi Somashekhar
ಪಟ್ಟಣದಲ್ಲೇ ಹುಟ್ಟಿ ಬೆಳೆದ ನನಗೆ ಅಷ್ಟಾಗಿ ಗ್ರಾಮೀಣ ಪರಿಚಯವಿಲ್ಲ. ಆದರೂ ಗ್ರಾಮ್ಯ ಸೊಗಡನ್ನು ಕವನದಲ್ಬಿ ಬಿಂಬಿಸುವ ಪುಟ್ಟ ಪ್ರಯತ್ನ ಮಾಡಿದ್ದೇನೆ. ಧನ್ಯವಾದಗಳು ಗೆಳೆಯ .. Paresh Saraf
ಈ ವರ್ಷದ ಜಾತ್ರೆ ಇನ್ನೂ ಆಗಿಲ್ಲ ಮಂಜು. ಬಹುಶಃ ಮುಂದಿನ ತಿಂಗಳು ಅನಿಸುತ್ತೆ. ನೀನೆ ಹೇಳಿದಂತೆ ಸ್ವಲ್ಪ ದೇವರ ಆರಾಧನೆ ಇರಲಿ. ಧನ್ಯವಾದಗಳು Manju M Doddamani
ಪಟ್ಟಾಭಿಷೇಕದ ಸಂತಸದಲ್ಲಿ ಪಾಲ್ಗೊಂಡಿದ್ದು ಸಂತಸವಾಯ್ತು ಸತೀಶ್. ಹಾಗೇ ದೈವಾರಾಧನೆಗೆ ಅಂತಾ ನಮ್ಮ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ತಿಪ್ಪೇಸ್ವಾಮಿ ಜಾತ್ರೆಗೂ ಕರೆದೊಯ್ದಿದ್ದೇನೆ. ನಿಮ್ಮ ಹರಕೆಗೆ ಧನ್ಯವಾದಗಳು ಸತೀಶ್ ಡಿ. ಆರ್. ರಾಮನಗರ
ಕವಿತೆಯಲ್ಲಿ ಮೆಚ್ಚಿದ ಎಲ್ಲಾ ಗೆಳೆಯ ಗೆಳತಿಯರಿಗೂ ಧನ್ಯವಾದಗಳು.
Post a Comment