Tuesday, September 30, 2008

ಬೆಳಗು

ಉದಯಿಸಿದ ರವಿ ಮೂಡಣದಿ, ರವಿ ಉದಯಿಸಿದ
ತಾ ಕೆಂಪೇರುತ, ಹೊನ್ನಕಿರಣಗಳ ತಾನು ಹರಡಿಸಿದ

ಆ ಸೂರ್ಯನ ಕಿರಣಗಳು ಭುವಿಗೆ ತಾಕಿರಲು
ಮಂಜಿನ ಹನಿಗಳು ಕರಗಿ ಭುವಿಯ ಸೇರಿರಲು
ಹಕ್ಕಿಗಳೆಲ್ಲಾ ಚಿಲಿಪಿಲಿ ಎನ್ನುತಾ, ಸದ್ದನು ಮಾಡಲು
ನಿಜಕ್ಕೂ ಇದು ಭಾಸ್ಕರನ ಸಂತೋಷದ ಹೊನಲು

ಮೆಲ್ಲನೇ ಓಡಿ ಹೋಗುವಂತೆ, ಮಂಜು ಜಾರುತಿದೆ
ಆಗಸಕೆ ಬಂಗಾರದ ಲೇಪನವನು ಮಾಡಿದಂತಿದೆ
ಹಸಿರಿನ ನಡುವೆ ಬೆಳ್ಳಿಧೂಪವು ಹೊಗೆಯಾಡುತಿದೆ
ಇಡೀ ವನವೆಲ್ಲಾ ಮಂಜಿನಲಿ ತೋಯ್ದು ನಿಂತಂತಿದೆ

ಈ ಮುಂಜಾವಿನಲಿ ಈಗಷ್ಟೇ ಅರಳಿದ ಹೂಗಳು
ಈ ರಮಣೀಯತೆಯನು ನೋಡಿ ತಣಿದಿದೆ ಕಣ್ಗಳು
ಇದೆಲ್ಲಾ ಯಾವ ಕಲೆಗಾರನ ಸುಂದರ ಕನಸುಗಳು
ನಿಜಕ್ಕೂ ಆ ಕಲೆಗಾರನಿಗೆ ನನ್ನ ಕೋಟಿ ನಮನಗಳು

No comments: