Tuesday, September 30, 2008

ಕನ್ನಡ ಜನತೆ


ಹೇ ಭಾರತಾಂಬೆ, ಎಲ್ಲಿದೆ ಕರುನಾಡು ನಿನ್ನ ಕೋಪದಲಿ
ಅದೆಂದೋ ಮುಳುಗಿದೆ ನಿನ್ನ ಪ್ರೀತಿಯ ಕಡಲಲಿ

ಎಲ್ಲಿದ್ದರೂ ಜನಾ ಮುಗ್ಧರು, ನಮ್ಮ ಈ ಕನ್ನಡಿಗರು
ಪ್ರೀತಿ-ಪ್ರೇಮದ ರಜತಮೂರ್ತಿಗಳು ಈ ಜನರು
ಶಾಂತಿ-ಸೌಹಾರ್ದತೆಯ ನವಪ್ರತಿಮೆಗಳು ಇವರು
ಕನ್ನಡಮ್ಮನ ಮಕ್ಕಳು ಈ ಕೆಚ್ಚೆದೆಯ ರಣಧೀರರು

ಶಾಂತಿಗೆ ಸಾಕ್ಷಿ, ಕರ್ನಾಟಕದ ರಮ್ಯತಾಣಗಳು
ಅವನ ಧೈರ್ಯಕ್ಕೆ ಹೆಗ್ಗುರುತು ಐತಿಹಾಸಿಕ ಸ್ಥಳಗಳು
ಪ್ರತಿ ಕನ್ನಡಿಗರೂ ಸಹ, ವೀರ ಗಂಡುಗಲಿಗಳು
ಕನ್ನಡತಿಯರೆಲ್ಲರೂ ಹೊಳೆವ ಬಂಗಾರದ ಶಿಲ್ಪಿಗಳು

'ಕಾಯಕವೇ ಕೈಲಾಸ'ವೆಂಬ ಧರ್ಮ ಅವರದು
ಎಲ್ಲರೊಡನೆ ಬೆರೆತು ಬಾಳುವ ಭಾವ ಇವರದು
ಸುವರ್ಣ ಇತಿಹಾಸವಿದೆ, ಕರುನಾಡ ರಾಜರದು
ಸದ್ಗುಣವಂತರಿಂದ ಪ್ರಶಂಸಿದ ಭಾವ ಕನ್ನಡಿಗರದು

No comments: