
ಹೋಗುತಿದೆ ನೋಡು, ಈ ಊರಿನ ಬೆಳಕು
ನಮಗೆಲ್ಲ ಈಗ ಬರೀ ದುಃಖದ ಮೆಲುಕು
ಈ ಊರಿನ ಬೆಳಕು ನಮ್ಮೀ ಹರಿಶ್ಚಂದ್ರ ನೃಪನು
ಕೊಟ್ಟ ಮಾತಿಗೆಂದೂ ಇವನು ತಪ್ಪಲಾರನು
ಉಸಿರ ತೊರೆದರೂ ಸತ್ಯಕ್ಕಾಗಿ ಮರುಜನಿಸುವನು
ಸತ್ಯವನು ಬಿಟ್ಟು ಅರೆಕ್ಷಣ ಬದುಕಲಾರನು
ವಿಶ್ವಾಮಿತ್ರನ ಮಾಯಾಜಾಲಕೆ ಸಿಲುಕಿ
ಪುರದ ಜನರ ನೋವನ್ನು ತನ್ನಲ್ಲೇ ಹುದುಕಿ
ನೋವಿನಿಂದಲಿ ನಮ್ಮ ಹೃದಯವ ಕಲಕಿ
ಹೇಗೆ ಆರಿಸುವನೋ ಕಾಣೆ, ಕಷ್ಟವೆಂಬ ಬೆಂಕಿ
ಸಾಲದ ಪಾವತಿಗೆ ಮಗನನ್ನು ಮಾರಿದನು
ಸತಿ ಹಾಗೂ ತನ್ನನು ತಾನೇ ಮಾರಿಕೊಂಡನು
ಜೀವನ ನಡೆಸಲು ಮಸಣವನು ಕಾಯುವನು
ಸತ್ಯದಾವಿಷ್ಕಾರಕ್ಕಾಗಿ ಸತಿಯ ಕಡಿಯಲೆತ್ನಿಸಿದನು
No comments:
Post a Comment