
ವಂದನೆ, ಅಭಿನಂದನೆ ಹೇ ಕಲಾರಸಿಕ
ನೀ ನೆಲೆಸಿದ ತಾಣವಿದುವೇ ಕರ್ನಾಟಕ
ಚೆಲುವ ಕನ್ನಡನಾಡಿನ ಸುಂದರ ಪರಿಸರ
ಕನ್ನಡಿಗರ ತುಂಬು ಹೃದಯದ ಆದರ
ಯಕ್ಷಗಾನ, ಗೊಂಬೆಯಾಟವನು ನೋಡಿರಾ
ಕರುನಾಡ ಕಲೆಯಿದು ನನ್ನಣ್ಣಗಳಿರಾ
ವಚನ ಸಾಹಿತ್ಯ, ಜನಪದ ಸಾಹಿತ್ಯ
ಮಕ್ಕಳ ಸಾಹಿತ್ಯ, ಇನ್ನೂ ಅತ್ಯಂತ್ಯ
ಮಾಮರ-ಕೋಗಿಲೆ ಸಂಬಂಧ ರೀತ್ಯಾ
ಕನ್ನಡ ಸಾಹಿತ್ಯಕ್ಕಿಲ್ಲ ಎಂದೂ ಅಂತ್ಯ
ಆದಿಕವಿ ರನ್ನ, ಪಂಪ, ರಾಘವಾಂಕ
ಇವರ ಕಾವ್ಯದಲ್ಲಿ ಇರುವ ರೂಪಕ
ಅದರ ಅರ್ಥವೇ ಮೈ ರೋಮಾಂಚಕ
ಕನ್ನಡಿಗನೇ ಸೌಂದರ್ಯದ ಮೊದಲ ಅರ್ಚಕ
No comments:
Post a Comment