Monday, September 29, 2008

ಕರ್ನಾಟಕ


ವಂದನೆ, ಅಭಿನಂದನೆ ಹೇ ಕಲಾರಸಿಕ
ನೀ ನೆಲೆಸಿದ ತಾಣವಿದುವೇ ಕರ್ನಾಟಕ

ಚೆಲುವ ಕನ್ನಡನಾಡಿನ ಸುಂದರ ಪರಿಸರ
ಕನ್ನಡಿಗರ ತುಂಬು ಹೃದಯದ ಆದರ
ಯಕ್ಷಗಾನ, ಗೊಂಬೆಯಾಟವನು ನೋಡಿರಾ
ಕರುನಾಡ ಕಲೆಯಿದು ನನ್ನಣ್ಣಗಳಿರಾ

ವಚನ ಸಾಹಿತ್ಯ, ಜನಪದ ಸಾಹಿತ್ಯ
ಮಕ್ಕಳ ಸಾಹಿತ್ಯ, ಇನ್ನೂ ಅತ್ಯಂತ್ಯ
ಮಾಮರ-ಕೋಗಿಲೆ ಸಂಬಂಧ ರೀತ್ಯಾ
ಕನ್ನಡ ಸಾಹಿತ್ಯಕ್ಕಿಲ್ಲ ಎಂದೂ ಅಂತ್ಯ

ಆದಿಕವಿ ರನ್ನ, ಪಂಪ, ರಾಘವಾಂಕ
ಇವರ ಕಾವ್ಯದಲ್ಲಿ ಇರುವ ರೂಪಕ
ಅದರ ಅರ್ಥವೇ ಮೈ ರೋಮಾಂಚಕ
ಕನ್ನಡಿಗನೇ ಸೌಂದರ್ಯದ ಮೊದಲ ಅರ್ಚಕ

No comments: