Tuesday, September 30, 2008

ನಾಡ ಇತಿಹಾಸ


ಹೇ ಕೋಗಿಲೆ, ಹಾಡು ಬಾ ಕರುನಾಡ ಇತಿಹಾಸವನು
ನಿನ್ನಿಂದಲೇ ತಂದುಕೊಂಡೆ ನಾ ಸಂತಸವನು

ಚಿತ್ರದುರ್ಗದ ವೀರ ಮದಕರಿನಾಯಕನ ಕಥೆಯನು
ಬೇಲೂರು, ಹಳೆಬೀಡು, ಹಂಪಿಯ ವೈಭವವನು
ಬೆಳವಡಿ ಮಲ್ಲಮ್ಮ, ಕಿತ್ತೂರು ಚೆನ್ನಮರ ಚರಿತೆಯನು
ಹಾಡು ನಿನ್ನ ದನಿಯಿಂದ, ಕೇಳಿ ತಣಿವುದು ತನು

ಶಾರದೆಯ ಕಲಾಲೋಕ ಹಂಪಿಯ ಬಣ್ಣನೆಯನು
ವೀರತೆಗೆ ಹೆಸರಾದ, ದುರ್ಗಗಳ ಇತಿಹಾಸವನು
ಧೈರ್ಯಕ್ಕೆ ಸವಾಲಾದ ಕನ್ನಡಿಗನ ದಿಟ್ಟತೆಯನು
ಹಾಡು ನಿನ್ನ ದನಿಯಿಂದ, ಕೇಳಿ ತಣಿವುದು ತನು

ಒನಕೆ ಓಬವ್ವ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮರನು
ಉತ್ಸಾಹದ ನೆತ್ತರು ತುಂಬಿದ ಕನ್ನಡದ ಕಂದರನು
ಕನ್ನಡನಾಡಿನ ಗಂಡುಗಲಿಗಳ ವೀರೋತ್ಸಾಹವನು
ಹಾಡು ನಿನ್ನ ದನಿಯಿಂದ, ಕೇಳಿ ತಣಿವುದು ತನು

No comments: