Sunday, September 28, 2008

ಕರುನಾಡು

ಕನ್ನಡ ತಾಯಿಯ ಮಕ್ಕಳು ನಾವು
ಈ ಸುಂದರ ಸ್ವರ್ಗದ ಸುಖಿಗಳು ನಾವು

ಕರುನಾಡ ನೆಲದಲಿ ಎಲ್ಲೆಡೆಯೂ ಹಸಿರು
ಕನ್ನಡಿಗನ ನಾಸಿಕದಲ್ಲಿದೆ ಪ್ರೀತಿಯ ಉಸಿರು
ಕಲೆ, ಸಾಹಿತ್ಯ, ದೈವಭಕ್ತಿಗಿದು ತವರೂರು
ಪ್ರತಿಯೊಂದು ಕ್ಷೇತ್ರದಲಿ ಗಳಿಸಿದೆ ಹೆಸರು

ಇಲ್ಲಿರುವುದು ಹಸಿರು ತುಂಬಿದ ಕಾಡು
ಸಿಡಿಲಿಗೂ ಹೆದರದ ಕನ್ನಡಿಗರ ಬೀಡು
ಗಂಧದಗುಡಿಯಾಗಿದೆ ನಮ್ಮೀ ಕರುನಾಡು
ಸೌಂದರ್ಯದ ನಾಕವು ಇಲ್ಲಿದೆ ನೋಡು

ಹಸುಗೂಸಿನ ಮೊದಲ ಮಾತು ಕನ್ನಡ
ಮುದಿಮುತ್ಸದಿಯ ಕೊನೆಮಾತು ಕನ್ನಡ
ವಿಶ್ವದಲ್ಲೇ ಚೆಲುವ ಭಾಷೆ ನಮ್ಮ ಈ ಕನ್ನಡ
ಕವಿವರ್ಯನ ಒಲವಿನ ಭಾಷೆಯೂ ಕನ್ನಡ

No comments: