Tuesday, September 30, 2008

ಸರ್ವಾಂತರ್ಯಾಮಿ

ಭರತಭೂಮಿಯ ಕೀರ್ತಿ ಸರ್ವಾಂತರ್ಯಾಮಿ
ಆದರಿಂದು ಆಗುತಿದೆ ಮೋಸದ ಆವಾಂತರ್ಯಾಮಿ

ರಾಜಕಾರಣಿಗಳಿಗೆ ತಮ್ಮ ಸುಖದ ಹೊಸ್ತಿಲಲ್ಲಿ,
ತನ್ನ ಪ್ರಜೆಗಳ ಹಿತವೇ ಮರೆತುಹೋಯ್ತು.
ಈ ಭಾರಂತಾಂಬೆಯ ಹೊನ್ನ ಮಡಿಲಿನಲ್ಲಿ,
ಶಾಂತಿ-ಅಹಿಂಸಾ ತತ್ವವೇ ಮಾಯವಾಯ್ತು.

ಭರತಮಾತೆಗೆ, ಶಾಂತಿ ಇಲ್ಲದಂತಾಯ್ತು,
ಕಂಡು ಆ ದುರ್ಜನರ ದುರ್ವರ್ತನೆ.
ಮಾಡುವವರು ಯಾರು ಇಲ್ಲದಂತಾಯ್ತು,
ಅಂಥವರ ವಿರುದ್ಧ ಜೋರಾಗಿ ಸಿಂಹಘರ್ಜನೆ.

ಕ್ಷಣಕ್ಷಣಕೂ ಮುಚ್ಚುತಿದೆ ಭರತಮಾತೆಯ
ಮೊಗವನು, ಸರ್ವಭೀತಿಯ ಮುಸುಕು
ತಡೆಯಲಾಗದೇನು, ಆಗದಂತೆ ದೇಶಭ್ರಷ್ಟತೆಯ
ಇಲ್ಲದಂತಾಗಿಸಲು ಅಭದ್ರತೆಯ ಹುಳುಕು

No comments: