Tuesday, September 30, 2008

ಕಷ್ಟ


ಬಾಳೊಂದು ಸುಂದರ ಕೇದಿಗೆ ಹೂವಂತೆ
ಮನುಜಗೆ ಬದುಕಿನ ಮರ್ಮ ತಿಳಿಯದಂತೆ

ಸಂಪಿಗೆ ಹೂವಂತೆ ನಿಮ್ಮ ಬದುಕು
ಅರಿತಾಗ ಬಾಳಲ್ಲಿ ಬರುವುದು ಹೊಸಬೆಳಕು
ಮರೆತಾಗ ಆಗುವುದು ತುಂಬಾ ಕೆಡುಕು
ಆಗಬೇಕು ಇಲ್ಲಿ, ನಿಮ್ಮ ಬುದ್ದಿ ಚುರುಕು

ಬರೀ ಮುಳ್ಳು ತುಂಬಿದ ಹೂವಾದರೂ
ನಿಮ್ಮ ಬಾಳಲಿ ಕಷ್ಟವೇ ತುಂಬಿದ್ದರೂ
ಕಷ್ಟಗಳಿಗೆ ನೀನು ಎಂದೂ ಅಳುಕದಿರು
ನೀನೆಂದಿಗೂ ತುಂಬಾ ಧೈರ್ಯವಾಗಿರು

ಬರಲಿಲ್ಲವೇನು ಆ ಶ್ರೀರಾಮನಿಗೂ ಕಷ್ಟ
ಕಷ್ಟಕೆ ಮನುಜನು ಎಂದಿಗೂ ಕನಿಷ್ಟ
ಭಕ್ತರ ತಿರಿದು ನೋಡುವುದವಗೆ ಇಷ್ಟ
ಕಷ್ಟವನು ಮರೆತು ಬದುಕಿದರೇನು ನಷ್ಟ

No comments: