
ಬಾಳೊಂದು ಸುಂದರ ಕೇದಿಗೆ ಹೂವಂತೆ
ಮನುಜಗೆ ಬದುಕಿನ ಮರ್ಮ ತಿಳಿಯದಂತೆ
ಸಂಪಿಗೆ ಹೂವಂತೆ ನಿಮ್ಮ ಬದುಕು
ಅರಿತಾಗ ಬಾಳಲ್ಲಿ ಬರುವುದು ಹೊಸಬೆಳಕು
ಮರೆತಾಗ ಆಗುವುದು ತುಂಬಾ ಕೆಡುಕು
ಆಗಬೇಕು ಇಲ್ಲಿ, ನಿಮ್ಮ ಬುದ್ದಿ ಚುರುಕು
ಬರೀ ಮುಳ್ಳು ತುಂಬಿದ ಹೂವಾದರೂ
ನಿಮ್ಮ ಬಾಳಲಿ ಕಷ್ಟವೇ ತುಂಬಿದ್ದರೂ
ಕಷ್ಟಗಳಿಗೆ ನೀನು ಎಂದೂ ಅಳುಕದಿರು
ನೀನೆಂದಿಗೂ ತುಂಬಾ ಧೈರ್ಯವಾಗಿರು
ಬರಲಿಲ್ಲವೇನು ಆ ಶ್ರೀರಾಮನಿಗೂ ಕಷ್ಟ
ಕಷ್ಟಕೆ ಮನುಜನು ಎಂದಿಗೂ ಕನಿಷ್ಟ
ಭಕ್ತರ ತಿರಿದು ನೋಡುವುದವಗೆ ಇಷ್ಟ
ಕಷ್ಟವನು ಮರೆತು ಬದುಕಿದರೇನು ನಷ್ಟ
No comments:
Post a Comment